
ಆಲೂರು: ಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟ ಹಳ್ಳಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಬೆಟ್ಟ ಹಳ್ಳಿ, ನಲ್ಲೂರು, ಪಾಳ್ಯ ಮಾರ್ಗವಾಗಿ ಹಾಸನಕ್ಕೆ ಸಂಚರಿಸುವ ನೂತನ ಬಸ್ ಸಂಚಾರಕ್ಕೆ ಹಸಿರು ಭಾವುಟ ತೊರಿಸುವುದರ ಮೂಲಕ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿಮೆಂಟ್ ಮಂಜು ರವರು ಚಾಲನೆ ನೀಡಿದರು.
ಈ ಭಾಗದ ಜನರು ಪ್ರತಿನಿತ್ಯ ನಗರಕ್ಕೆ ಸಂಚಾರ ಮಾಡಲು ಸಮಸ್ಯೆಯಿಂದ ಪರದಾಡುತಿದ್ದ ಬೆಟ್ಟಹಳ್ಳಿ ಭಾಗದ ಜನರಿಗೆ ಸಂತಸ ಉಂಟುಮಾಡಿದೆ,ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳಬೇಕು ಮೂಲಭೂತ ಸೌಕರ್ಯ ಪಡೆದುಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.


