ದೇವರ ಕೃಪೆ, ಗುರುವಿನ ಆಶೀರ್ವಾದ ಇದ್ದಾಗ ಜೀವನದಲ್ಲಿ ಯಶ್ವಸಿ ಸಾಧ್ಯ- ನೀತೀನ್ ಮೋರೆ ಗುರೂಜಿ,

ಬೆಂಗಳೂರು:ಅಖಿಲ ಭಾರತೀಯ ಶ್ರೀ ಸ್ವಾಮಿ ಸಮರ್ಥ ಗುರುಪೀಠವತಿಯಿಂದ ರಾಷ್ಟ್ರೀಯ ಆಧ್ಯಾತ್ಮಿಕ ಸತ್ಸಂಗ, ಶ್ರೀ ಚಕ್ರರಾಜ್ ಶ್ರೀ ಯಂತ್ರ ಶ್ರೀ ವಿದ್ಯಾ ಸರಸ್ವತಿ ಮತ್ತು ಶ್ರೀ ಗುರುಪಾದಕ ಪೂಜೆಯನ್ನು ಆಧ್ಯಾತ್ಮಿಕ ಚಿಂತಕರಾದ ನಿತೀನ್ ಮೋರೆರವರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆಧ್ಯಾತ್ಮಿಕ ಚಿಂತಕರಾದ ನಿತೀನ್ ಮೋರೆರವರ ಕಾರ್ಯಕ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಸನಾತನ ಧರ್ಮದಲ್ಲಿ ಆಧ್ಯಾತ್ಮಿಕ ಚಿಂತಕ ಉಳ್ಳವರು ಗುರುವಿನ ಪಾದ ಪೂಜೆಗೆ ಬಹಳ ವಿಶೇಷ ಅರ್ಥವಿದೆ.
ನಾನು ಎಂಬುದು ಅಹಂಕಾರ, ನಾವೆಲ್ಲರು ಎಂಬುದು ಶ್ರೇಯಸ್ಸು, ದೇವರ ಮುಂದೆ ತಲೆಬಾಗಿದಾಗ ಜೀವನದಲ್ಲಿ ಯಶ್ವಸಿ ಸಾಧ್ಯ.
ಮಾನವ ಪ್ರಯತ್ನ ಎಷ್ಟೆ ಇದ್ದರು ದೇವರ ಕೃಪೆ ಇರಬೇಕು. ಮಾನವ ಕಲ್ಯಾಣವಾಗಬೇಕು ಎಂದರೆ ಆಧ್ಯಾತ್ಮದಲ್ಲಿ ತೊಡಗಬೇಕು.
ಗುರುವಿನ ಆಶೀರ್ವಾದವಿದ್ದರೆ ಮಾತ್ರ ಪುಣ್ಯ ಪ್ರಾಪ್ತಿಯಾಗುತ್ತದೆ. ನಮ್ಮ ಜೀವನದಲ್ಲಿ ಬಂದಿರುವ ಕಷ್ಟಗಳು ಗುರುವಿನ ಸೇವೆ ಮಾಡುವುದರಿಂದ ನಿವಾರಣೆ ಆಗುತ್ತದೆ.
ಕಾರ್ಯಕ್ರಮದಲ್ಲಿ ನಂದಕುಮಾರ್ ಭೋಸಲೇ, ಸುಪ್ರಿಯಾ ಕೊಳೆ, ಮಿಥುನ್ ನಿಕ್ಕಮ್, ದೀಪಕ್ ಜಾದವ್, ಸುನಿಲ ಬಂನ್ಸೋಡೆ, ಕಮಲಾ ಪಾಟೀಲ್, ಅಶೋಕ್ ಚಿತೃಕ್ ಪಾಲ್ಗೊಂದಿದ್ದರು.


