Country
Trending

ಜನವರಿಯಿಂದ ಇಲ್ಲಿಯವೆಗೆ ಅಮೆರಿಕದಿಂದ ಗಡಿಪಾರಾಗಿ ಭಾರತಕ್ಕೆ ಬಂದ ವಲಸಿಗರ ಸಂಖ್ಯೆ ಎಷ್ಟು?

ಹೊಸದಿಲ್ಲಿ: ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಸುಮಾರು 1,080 ಭಾರತೀಯ ಪ್ರಜೆಗಳನ್ನು, ಅಮೆರಿಕದಿಂದ ಗಡಿಪಾರು ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಜನವರಿಯಿಂದ ಆರಂಭವಾಗಿ ಇಲ್ಲಿಯವರೆಗೆ ಸುಮಾರು 1,080 ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕ ಗಡಿಪಾರು ಮಾಡಿದೆ. ಈ ಪೈಕಿ ಶೇ. 62ರಷ್ಟು ಅಕ್ರಮ ವಲಸಿಗರನ್ನು ವಾಣಿಜ್ಯ ವಿಮಾನಗಳಲ್ಲಿ ಭಾರತಕ್ಕೆ ಕಳುಹಿಸಿಕೊಡಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.”ಗಡಿಪಾರಿಗೆ ಮುಖ್ಯ ಕಾರಣಗಳೆಂದರೆ ವೀಸಾ ನಿಯಮಗಳ ಉಲ್ಲಂಘನೆ, ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವುದು ಮತ್ತು ಕೆಲವು ಸಂದರ್ಭಗಳಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು” ಎಂದು ರಣಧೀರ್‌ ಜೈಸ್ವಾಲ್‌ ಇದೇ ವೇಳೆ ಮಾಹಿತಿ ನೀಡಿದ್ದಾರೆ.

“ಅಮೆರಿಕದ ಅಧಿಕಾರಿಗಳು ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿದ ನಂತರವೇ, ಭಾರತೀಯ ಪ್ರಜೆಗಳ ಗಡಿಪಾರು ಪ್ರಕ್ರಿಯೆ ನಡೆಯುತ್ತಿದೆ. ಅಮೆರಿಕದಲ್ಲಿ ಬಂಧನದಲ್ಲಿರುವ ಭಾರತೀಯರಿಗೆ ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು ಅಗತ್ಯವಿರುವ ದೂತಾವಾಸದ ನೆರವನ್ನು ಒದಗಿಸುತ್ತಿವೆ” ಎಂದು ಜೈಸ್ವಾಲ್‌ ಇದೇ ವೇಳೆ ಹೇಳಿದರು.”ಅಮೆರಿಕದ ಅಧಿಕಾರಿಗಳು ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿದ ನಂತರವೇ, ಭಾರತೀಯ ಪ್ರಜೆಗಳ ಗಡಿಪಾರು ಪ್ರಕ್ರಿಯೆ ನಡೆಯುತ್ತಿದೆ. ಅಮೆರಿಕದಲ್ಲಿ ಬಂಧನದಲ್ಲಿರುವ ಭಾರತೀಯರಿಗೆ ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು ಅಗತ್ಯವಿರುವ ದೂತಾವಾಸದ ನೆರವನ್ನು ಒದಗಿಸುತ್ತಿವೆ” ಎಂದು ಜೈಸ್ವಾಲ್‌ ಇದೇ ವೇಳೆ ಹೇಳಿದರು.ಗಡಿಪಾರು ಪ್ರಕ್ರಿಯೆಯು ಮಾನವೀಯವಾಗಿ ನಡೆಯುವುದನ್ನು ಮತ್ತು ಭಾರತೀಯ ಪ್ರಜೆಗಳ ಹಕ್ಕುಗಳನ್ನು ಗೌರವಿಸುವುದನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರವು ಅಮೆರಿಕದ ಅಧಿಕಾರಿಗಳೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ವಕ್ತಾರ ರಣಧೀರ್‌ ಜೈಸ್ವಾಲ್‌ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಎರಡು ದೇಶಗಳ ನಡುವಿನ ಜನರ ಚಲನವಲನವನ್ನು ಸುರಕ್ಷಿತ, ಸುವ್ಯವಸ್ಥಿತ ಮತ್ತು ಕಾನೂನುಬದ್ಧ ರೀತಿಯಲ್ಲಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು, ಚಲನಶೀಲತೆ ಮತ್ತು ವಲಸೆಗೆ ಸಂಬಂಧಿಸಿದ ವಿವಾದ ವಿಷಯಗಳ ಕುರಿತು ಭಾರತವು ಅಮೆರಿಕದೊಂದಿಗೆ ನಿರಂತರ ಸಂಪರ್ಕದಲ್ಲಿದೆ.ಕಠಿಣ ವಲಸೆ ನೀತಿಯನ್ನು ಜಾರಿಗೆ ತಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತ, ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಗುರುತಿಸಿ ಗಡಿಪಾರು ಮಾಡುತ್ತಿದೆ. ಕೇವಲ ಭಾರತೀಯರು ಮಾತ್ರವಲ್ಲದೇ, ಮೆಕ್ಸಿಕೋ, ಎಲ್‌ ಸಲ್ವಾಡೋರ್‌ ಸೇರಿದಂತೆ ಲ್ಯಾಟಿನ್‌ ಅಮೆರಿಕದ ಹಲವು ದೇಶಗಳ ಅಕ್ರಮ ವಲಸಿಗರನ್ನೂ ಗಡಿಪಾರು ಮಾಡಲಾಗುತ್ತಿದೆ.ಕಳೆದ ಜನವರಿಯಿಂದ ಆರಂಭವಾದ ಭಾರತೀಯ ವಲಸಿಗರ ಗಡಿಪಾರು ಪ್ರಕ್ರಿಯೆಗೆ, ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಕ್ರಮ ವಲಸಿಗರ ಕೈ ಮತ್ತು ಕಾಲುಗಳಿಗೆ ಬೇಡಿ ತೊಡಿಸಿ, ಅವರನ್ನು ಮಿಲಟರಿ ವಿಮಾನಗಳಲ್ಲಿ ಭಾರತಕ್ಕೆ ರವಾನಿಸಿದ್ದು ಆಕ್ರೋಶಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ವಿಚಾರವಾಗಿ ಭಾರತದ ವಿದೇಶಾಂಗ ಸಚಿವ ಡಾ.ಎಸ್.‌ ಜೈಶಂಕರ್‌ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.ಕಳೆದ ಜನವರಿಯಿಂದ ಆರಂಭವಾದ ಭಾರತೀಯ ವಲಸಿಗರ ಗಡಿಪಾರು ಪ್ರಕ್ರಿಯೆಗೆ, ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಕ್ರಮ ವಲಸಿಗರ ಕೈ ಮತ್ತು ಕಾಲುಗಳಿಗೆ ಬೇಡಿ ತೊಡಿಸಿ, ಅವರನ್ನು ಮಿಲಟರಿ ವಿಮಾನಗಳಲ್ಲಿ ಭಾರತಕ್ಕೆ ರವಾನಿಸಿದ್ದು ಆಕ್ರೋಶಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ವಿಚಾರವಾಗಿ ಭಾರತದ ವಿದೇಶಾಂಗ ಸಚಿವ ಡಾ.ಎಸ್.‌ ಜೈಶಂಕರ್‌ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

Related Articles

Leave a Reply

Your email address will not be published. Required fields are marked *

Back to top button