ನಗರಸಭೆ
Trending

ಬಿಬಿಎಂಪಿಯಿಂದ ಬಹು ಫ್ಲ್ಯಾಟ್‌, ವಾಣಿಜ್ಯ ಘಟಕಗಳಿಗೆ ಖಾತಾ ಪಡೆಯಲು ಅವಕಾಶ, ಅರ್ಜಿ ಸಲ್ಲಿಕೆ ಹೇಗೆ?

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಬಹು ಫ್ಲ್ಯಾಟ್‌ಗಳು, ವಾಣಿಜ್ಯ ಘಟಕಗಳಿಗೆ ಹೊಸ ಖಾತಾ ಪಡೆಯಲು ಬಿಲ್ಡರ್‌ಗಳು ಹಾಗೂ ಮಾಲೀಕರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಸಂಬಂಧಪಟ್ಟವರೇ ಸ್ವಯಂ ಆಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ.

ಬಿಬಿಎಂಪಿ ವೆಬ್‌ಸೈಟ್‌ https://bbmp.karnataka.gov.in/newkhata/ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಎಲ್ಲ ಫ್ಲ್ಯಾಟ್‌ಗಳು ಅಥವಾ ಖಾತಾ ಇಲ್ಲದ ಘಟಕಗಳಿಗೆ ಸ್ವಯಂ ಆಗಿ ಹೊಸ ಖಾತಾ ರಚಿಸಿಕೊಳ್ಳಬಹುದಾಗಿದೆ.ಈಗಾಗಲೇ ಬಿಬಿಎಂಪಿ ಖಾತಾ ಹೊಂದಿದ್ದು, ಇ – ಖಾತಾ ಪಡೆಯಲು ಇಚ್ಛಿಸಿರುವವರು ಹೊಸ ಖಾತಾ ಪಡೆಯಲು ಪ್ರಯತ್ನಿಸಬಾರದು. ನಕಲಿ ಖಾತೆ ಪಡೆಯುವ ಇಂತಹ ಪ್ರಯತ್ನವು ವ್ಯಕ್ತಿಯನ್ನು ಕ್ರಿಮಿನಲ್‌ ಪ್ರಕರಣಕ್ಕೆ ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಎಚ್ಚರಿಕೆ ನೀಡಿದ್ದಾರೆ.

ಖಾತಾ ಪಡೆಯಲು ಅಗತ್ಯವಿರುವ ದಾಖಲೆಗಳು,

ಆಸ್ತಿಯ ಭಾವಚಿತ್ರ

ಪ್ರತಿನಿಧಿ ಅಥವಾ ಮಾಲೀಕರ ಆಧಾರ್‌ ಸಂಖ್ಯೆ

‘ಎ’ ಖಾತಾಗೆ ಕಟ್ಟಡದ ಅನುಮೋದಿತ ನಕ್ಷೆ ಮತ್ತು ಸ್ವಾಧೀನ ಪ್ರಮಾಣಪತ್ರ.

ಬೆಂಗಳೂರು: ಸಂಪನ್ಮೂಲ ಕ್ರೋಡೀಕರಣ ದೃಷ್ಟಿಯಿಂದ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೆ ‘ಬಿ-ಖಾತಾ’ ನೀಡಿ ಆಸ್ತಿ ತೆರಿಗೆ ವ್ಯಾಪ್ತಿಗೆ ತಂದು ಸಂಪನ್ಮೂಲ ಸಂಗ್ರಹಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ತಿದ್ದುಪಡಿ) ವಿಧೇಯಕ ಮಂಗಳವಾರ ಮಂಡನೆಯಾಯಿತು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆಯಲ್ಲಿ ಮಂಗಳವಾರ ವಿಧೇಯಕ ಮಂಡಿಸಿದರು. ಹಾಗೆಯೇ ಕೃಷ್ಣ ಬೈರೇಗೌಡರು ಕಂದಾಯ ಇಲಾಖೆಗೆ ಸಂಬಂಧಪಟ್ಟ ಐದು ವಿಧೇಯಕಗಳನ್ನು ಮಂಡಿಸಿದರು.ಡಿಜಿಟಲ್‌ ಇ-ಸ್ಟಾಂಪಿಂಗ್‌ ಅನ್ನು ಕ್ರಮಬದ್ಧಗೊಳಿಸಿ ಸ್ಟಾಂಪಿನ ಪರಿಯೊಳಗೆ ಸೇರ್ಪಡೆ ಮಾಡಲು, ಡಿಜಿಟಲ್‌ ಸಹಿಗಳಿಗೆ ಕಾನೂನಾತ್ಮಕ ಬೆಂಬಲ ನೀಡಲು ಹಾಗೂ ಡಿಜಿಟಲ್‌ ವಿಧಾನಗಳ ಮೂಲಕ ಸ್ಟಾಂಪು ಸುಂಕ ಸಾಧಿಸುವ ಸಂಬಂಧ ‘ಕರ್ನಾಟಕ ಸ್ಟ್ಯಾಂಪು (ತಿದ್ದುಪಡಿ) ವಿಧೇಯಕ’, ಕರ್ನಾಟಕ ಗ್ರಾಮ ಹುದ್ದೆಗಳ ರದ್ದತಿ ಕಾಯಿದೆಯಲ್ಲಿ ಉಲ್ಲೇಖವಾಗಿರುವ 1860ರ ಭಾರತೀಯ ದಂಡ ಸಂಹಿತೆ ಉಲ್ಲೇಖದ ಉಪಬಂಧಗಳಿಗೆ ಪ್ರತಿಯಾಗಿ 2023ರ ಭಾರತೀಯ ನ್ಯಾಯ ಸಂಹಿತೆ (ಕೇಂದ್ರ ಕಾಯಿದೆ 45) ಉಪಬಂಧಗಳನ್ನು ಪ್ರತಿಯೋಜಿಸಲು ಪೂರಕವಾಗಿ ಕರ್ನಾಟಕ ಗ್ರಾಮ ಹುದ್ದೆಗಳ ರದ್ದತಿ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ವಿಧೇಯಕ ಮಂಡನೆಯಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಮಂಡಿಸಿರುವುದಕ್ಕೆ ಪೂರಕವಾಗಿ ವೃತ್ತಿ ತೆರಿಗೆ ಕಾಯಿದೆಯಡಿ ಸಂಬಳ ಅಥವಾ ಮಜೂರಿ ಪಡೆಯುವವವರಿಂದ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿಪಾವತಿಸುವ ವೃತ್ತಿ ತೆರಿಗೆ 200 ರೂ.ಗೆ ಹೆಚ್ಚುವರಿ 100 ರೂ. ಸೇರಿದಂತೆ 300 ರೂ. ಸಂಗ್ರಹಕ್ಕೆ ಅವಕಾಶ ಕಲ್ಪಿಸುವ ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ ನೀಡಿತು. ಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧೇಯಕವನ್ನು ಪರ್ಯಾಲೋಚನೆಗೆ ಕೋರಿ ಅನುಮತಿ ಪಡೆದರು.


Related Articles

Leave a Reply

Your email address will not be published. Required fields are marked *

Back to top button