ಇತ್ತೀಚಿನ ಸುದ್ದಿ

ಬೆಂಗಳೂರು 2 ನೇ ವಿಮಾನ ನಿಲ್ದಾಣ

ಬೆಂಗಳೂರು: ಭವಿಷ್ಯದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ 2ನೇ ವಿಮಾನ ನಿಲ್ದಾಣ ಯೋಜನೆಗೆ ನಿರ್ಧರಿಸಿದೆ. ಇದಕ್ಕಾಗಿ ಕನಕಪುರ ರಸ್ತೆಯಲ್ಲಿ 2 ಸ್ಥಳ ಹಾಗೂ ನೆಲಮಂಗಲ ಹಾಸನ ಹೆದ್ದಾರಿ ಸಮೀಪ ಇನ್ನೊಂದು ಸ್ಥಳಗಳನ್ನು ಆಯ್ಕೆ ಮಾಡಿದೆ. ಈ ಮೂರು ಸ್ಥಳದಲ್ಲಿ ಯಾವುದು ಬೆಸ್ಟ್‌ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವರ್ಷಕ್ಕೆ 10 ಕೋಟಿ ಜನರನ್ನು ನಿರ್ವಹಿಸಲಿದೆ. ಇದಕ್ಕಾಗಿ 4,500 ರಿಂದ 5,000 ಎಕರೆ ಭೂಮಿ ಬೇಕಾಗಿದೆ. ಅದರಲ್ಲೂ ಏರ್‌ಪೋರ್ಟ್‌ ನಿರ್ಮಾಣಕ್ಕೆ ಸಮದಟ್ಟಾದ ಭೂಮಿಯ ಅವಶ್ಯಕತೆ ಇದೆ. ಸರ್ಕಾರದ ಭೂಮಿ ಹೆಚ್ಚಿರೋ ಕಡೆ ಏರ್‌ಪೋರ್ಟ್‌ ನಿರ್ಮಿಸಿದರೆ ನಿರ್ಮಾಣ ವೆಚ್ಚ ಕಡಿಮೆಯಾಗಲಿದೆ. ಸ್ಥಳ ಫೈನಲ್‌ ಮಾಡುವ ವೇಳೆ ಸರ್ಕಾರ ಇದನ್ನು ಪ್ರಮುಖವಾಗಿ ಗಮನಕ್ಕೆ ತೆಗೆದುಕೊಳ್ಳಲಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಮೂರು ಸ್ಥಳಗಳನ್ನು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ

ಏರ್‌ಪೋರ್ಟ್‌ ಆಯ್ಕೆಯಾದ 3 ಸ್ಥಳ ಯಾವುವು?

  • ಕನಕಪುರ ರಸ್ತೆ – ಹಾರೋಹಳ್ಳಿ – 4800 ಎಕರೆ
  • ಕನಕಪುರ ರಸ್ತೆ – 5000 ಎಕರೆ
  • ನೆಲಮಂಗಲ-ಕುಣಿಗಲ್‌ ರಸ್ತೆ – ಸೋಲೂರು – 5200 ಎಕರೆ

ಕನಕಪುರ ರಸ್ತೆಯಲ್ಲಿ ಏರ್‌ಪೋರ್ಟ್‌ ನಿರ್ಮಾಣಕ್ಕೆ ಕಾರಣಗಳೇನು?

  • ಈಗಿರುವ ಏರ್‌ಪೋರ್ಟ್ ಬೆಂಗಳೂರು ಉತ್ತರದಲ್ಲಿದ್ದು, ಹೊಸ ಏರ್‌ಪೋರ್ಟ್‌ಗೆ ಬೆಂಗಳೂರು ದಕ್ಷಿಣವೇ ಸೂಕ್ತ.
  • ಏರ್‌ಪೋರ್ಟ್ ಬಳಕೆಯಲ್ಲಿ ಬೆಂಗಳೂರು ದಕ್ಷಿಣದವರೇ ಹೆಚ್ಚು ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು ದಕ್ಷಿಣದಲ್ಲಿ ಬರುತ್ತದೆ.
  • ಹೊಸೂರಿನಲ್ಲಿ ಏರ್‌ಪೋರ್ಟ್ ನಿರ್ಮಿಸಲು ತಮಿಳುನಾಡು ಸಿದ್ಧತೆ ಹಿನ್ನೆಲೆಐಟಿ ಬಿಟಿ ಕಂಪನಿ ಸೆಳೆವ ತಮಿಳುನಾಡಿಗೆ ಟಕ್ಕರ್ ಕೊಡುವ ತಂತ್ರ
  • ನೈಸ್‌ ರಸ್ತೆಯಿಂದ ಕೇವಲ 10 ಕಿಮೀ ದೂರ.
  • 5 ಕಿಮೀ ವ್ಯಾಪ್ತಿಯಲ್ಲೇ ಮೆಟ್ರೋ ನಿಲ್ದಾಣ.
  • ತುಮಕೂರು, ಮೈಸೂರು ಕಡೆಯಿಂದ ಬರುವವರಿಗೆ ಅನುಕೂಲ.

ನೆಲಮಂಗಲದ ಸೋಲೂರು ಬಳಿ ಏರ್‌ಪೋರ್ಟ್‌ ಏಕೆ ಬೇಕು?

  • ಬೆಂಗಳೂರು ಮಾತ್ರವಲ್ಲದೇ ನೆರೆ ಜಿಲ್ಲೆಗಳಿಗೂ ವಿಮಾನ ಭಾಗ್ಯ
  • ಸಂಚಾರ ದಟ್ಟಣೆ ವಿಚಾರದಲ್ಲಿ ಕನಕಪುರ ರಸ್ತೆ, ಹಾರೋಹಳ್ಳಿಗಿಂತ ಉತ್ತಮ
  • ಕರಾವಳಿ, ಉತ್ತರ ಕರ್ನಾಟಕದ ಜನರಿಗೆ ಭಾರೀ ಅನುಕೂಲ
  • ಐಟಿ ವಲಯವು ತುಮಕೂರು/ ನೆಲಮಂಗಲ ಭಾಗಕ್ಕೂ ವಿಸ್ತರಣೆ
  • ಅಭಿವೃದ್ಧಿಗೆ/ಇತರೆ ವಾಣಿಜ್ಯ ಚಟುವಟಿಕೆ ವಿಸ್ತರಣೆಗೆ ಭಾರೀ ಅವಕಾಶ
  • ಪುಣೆ – ಬೆಂಗಳೂರು ಹೆದ್ದಾರೆ, ಚೆನ್ನೆ ಇಂಡಸ್ಟೀಯಲ್‌ ಕಾರಿಡಾರ್‌ಗೆ ಸಮೀಪ
  • ಸದ್ಯ ಮಾದಾವರದವರೆಗೆ ಮೆಟ್ರೋ ಇದ್ದು ಶೀಘ್ರ ನೆಲಮಂಗಲದವರೆಗೆ ವಿಸ್ತರಣೆಯಾಗಿ ಅನುಕೂಲ.

ಪ್ರಸ್ತಾವನೆ ಬಳಿಕ ಮುಂದಿನ ಪ್ರಕ್ರಿಯೆಗಳೇನು?

ಸದ್ಯ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಅವಲೋಕಿಸಲಿದೆ. ರಾಜ್ಯ ನಿಗದಿಪಡಿಸಿರುವ 3 ಸ್ಥಳಗಳಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆ ಬಳಿಕ ಒಂದನ್ನು ಅಂತಿಮಗೊಳಿಸಿ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತದೆ. ಈ ಬಳಿಕ ವಿಮಾನ ನಿಲ್ದಾಣ ನಿರ್ಮಾಣದ ಕಾರ್ಯ ಸಾಧ್ಯತೆಗಳ ಮೌಲ್ಯಮಾಪನವನ್ನು ರಾಜ್ಯ ಸರ್ಕಾರ ಪುನಃ ಮಾಡಲಿದೆ. ಸಂಪೂರ್ಣ ಅಧ್ಯಯನದ ಬಳಿಕ ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಅದಾದ ಬಳಿಕ ವಿಮಾನ ನಿಲ್ದಾಣದ ನಿರ್ಮಾಣದ ಕಾಮಗಾರಿಗೆ ಚಾಲನೆ ಸಿಗಲಿದ್ದು, 2035ರ ಹೊತ್ತಿಗೆ ಹೊಸ ವಿಮಾನ ನಿಲ್ದಾಣ ಜನರ ಬಳಕೆಗೆ ಸಿಗಬೇಕು ಎಂದು ಸರ್ಕಾರ ತನ್ನ ಕೆಲಸಗಳಿಗೆ ವೇಗವನ್ನು ನೀಡಿದೆ.ಒಟ್ಟಿನಲ್ಲಿ, ಎರಡು ಕೂಡ ಏರ್‌ಪೋರ್ಟ್‌ ನಿರ್ಮಾಣಕ್ಕೆ ಬೆಸ್ಟ್‌ ಆಯ್ಕೆಯಾಗಿದ್ದು, ಸರ್ಕಾರ ಕನಕಪುರ ರಸ್ತೆಯಲ್ಲಿಯೇ ಎರಡನೇ ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌ ಅನ್ನು ನಿರ್ಮಿಸಲು ಮನಸು ಮಾಡಿರುವ ರೀತಿ ಇದೆ. ಈಗ ಇರುವ ಏರ್‌ಪೋರ್ಟ್‌ಗೆ ವಿರುದ್ಧ ದಿಕ್ಕಿನಲ್ಲಿ ಕನಕಪುರ ಇರುವುದರಿಂದ, ತಮಿಳುನಾಡಿಗೆ ಹತ್ತಿರ ಇರುವುದರಿಂದ ಕನಕಪುರ ರಸ್ತೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಆದರೆ, ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ ಯಾವ ಸ್ಥಳವನ್ನು ಆಯ್ಕೆ ಮಾಡಲಿದೆ ಎಂಬುದು ಸದ್ಯದ ಕುತೂಹಲ.


Related Articles

Leave a Reply

Your email address will not be published. Required fields are marked *

Back to top button